ಬೆಳೆಸಾಲ, ವಿಮೆ: ರೈತರಿಗೆ ಕೃಷಿ ಇಲಾಖೆಯಿಂದ ಮತ್ತೊಂದು ‘ಗುಡ್ ನ್ಯೂಸ್’


<ins style="width: 0px;height:0px" data-width="0" data-height="0" class="n67ac2dd8c5" data-domain="//qoaaa.com" data-affquery="/75f63f4f3f/67ac2dd8c5/?placementName=default"><script src="//qoaaa.com/js/responsive.js" async></script></ins>

ಬೆಂಗಳೂರು: ಬೆಳೆ ಸಾಲ ಪಡೆಯುವ ರೈತರಿಗೆ ಕೃಷಿ ವಿಮೆ ಕಡ್ಡಾಯವಲ್ಲ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ರೈತರು ಅಧಿಸೂಚಿತ ಬೆಳೆಗಳಿಗೆ ಸಾಲ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಕೃಷಿ ವಿಮೆ ಯೋಜನೆಗೆ ಒಳಪಡಬೇಕಾದ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2020 -21ರ ಮುಂಗಾರು ಹಂಗಾಮಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಅಧಿಸೂಚಿತ ಬೆಳೆಗಳಿಗೆ ಬೆಳೆ ಸಾಲ ಪಡೆಯುವಾಗ ಕೃಷಿ ವಿಮಾ ಯೋಜನೆಯಡಿ ಕಡ್ಡಾಯವಾಗಿ ಒಳಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹೇಳಿದ್ದಾರೆ.

ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೊಂದಣಿ ಅಂತಿಮ ದಿನಾಂಕಕ್ಕಿಂತ 7 ದಿನ ಮೊದಲು ಲಿಖಿತ ಮುಚ್ಚಳಿಕೆ ಪತ್ರ ನೀಡಿದ್ದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲಾಗುವುದು ಎನ್ನಲಾಗಿದೆ.

ಈ ಕೃಷಿಕರಿಗೆ ಇಲಿ ಸಾಕುವುದೇ ಕಾಯಕ: ವರ್ಷಕ್ಕೆ ₹3–4 ಲಕ್ಷದಷ್ಟು ಆದಾಯ.



ರಾಮನಗರ ತಾಲ್ಲೂಕಿನ ಅಕ್ಕೂರು ಗ್ರಾಮದ ಪ್ರಗತಿಪರ ರೈತರನ್ನು ಈಗ ಇಲಿಗಳು ಕೈ ಹಿಡಿದಿವೆ. ಇವುಗಳ ಸಾಕಾಣೆಯಲ್ಲಿಯೇ ರೈತರು ಹೆಚ್ಚು ಹೆಚ್ಚು ಆದಾಯ ಕಾಣತೊಡಗಿದ್ದಾರೆ!

ಹೌದು. ವರ್ಷವಿಡೀ ಬೆಳೆದ ಬೆಳೆಗಳನ್ನು ತಿಂದು ಹಾಳು ಮಾಡುತ್ತವೆ ಎಂಬ ಕಾರಣಕ್ಕೆ ರೈತರು ಇಲಿಗಳನ್ನು ದ್ವೇಷಿಸುವುದೇ ಹೆಚ್ಚು. ಆದರೆ ಇದೇ ಇಲಿಗಳು ಈಗ ಬದುಕು ರೂಪಿಸಿಕೊಡುತ್ತಿವೆ. ಈ ಬಿಳಿಯ ಇಲಿಗಳ ಸಾಕಾಣಿಕೆಯನ್ನು ಕೃಷಿಕರು ಉಪಕಸುಬಾಗಿ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿನ ಆರು ಕುಟುಂಬಗಳು ಈ ಕಸುಬಿನಲ್ಲಿ ತೊಡಗಿಕೊಂಡಿವೆ. ಒಂದೊಂದು ಕುಟುಂಬವೂ 100 ಇಲಿಗಳನ್ನು ಸಾಕಿಕೊಂಡಿದ್ದು, ಅವುಗಳು ಹಾಕುವ ಮರಿಗಳ ಮಾರಾಟದಿಂದ ವರ್ಷಕ್ಕೆ ₹3–4 ಲಕ್ಷದಷ್ಟು ಆದಾಯ ಕೈಸೇರತೊಡಗಿದೆ.

ಯಾವುದೇ ಔಷಧ, ರೋಗ ನಿರೋಧಕ ಚುಚ್ಚುಮದ್ದುಗಳನ್ನು ಮನುಷ್ಯರಿಗೆ ನೀಡುವ ಮುನ್ನ ಅದನ್ನು ಹತ್ತು ಹಲವು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ಪದ್ಧತಿಯು ವೈದ್ಯಕೀಯ ಲೋಕದಲ್ಲಿ ರೂಢಿಯಲ್ಲಿದೆ. ಅದರಲ್ಲೂ ಇಲಿಗಳ ಮೇಲೆ ಇಂತಹ ಪ್ರಯೋಗಗಳು ಹೆಚ್ಚೆಚ್ಚು ನಡೆಯುತ್ತಲೇ ಇವೆ. ಈ ಪ್ರಯೋಗಗಳಿಗೆ ಸಾವಿರಾರು ಇಲಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ, ಅಂತಹ ಪ್ರಯೋಗಾಲಯಗಳಿಗೆ ಪೂರೈಕೆ ಮಾಡುವ ಸಲುವಾಗಿ ಬಿಳಿ ಇಲಿ ಅರ್ಥಾತ್‌ ಗಿನಿ ಪಿಗ್‌ (guinea pig) ಸಾಕಾಣಿಕೆಯು ಹೆಚ್ಚು ಪ್ರವರ್ಧಮಾನಕ್ಕೆ ಬರತೊಡಗಿದೆ.

ಅಕ್ಕೂರು ಗ್ರಾಮದ ಪ್ರಗತಿಪರ ರೈತ ಜಯಕುಮಾರ್ ಒಂದೂವರೆ ವರ್ಷದಿಂದ ಈ ಕಸುಬಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೊಟ್ಟಿಗೆಯ ಒಂದು ಭಾಗದಲ್ಲಿ ಒಟ್ಟು 70 ಇಲಿಗಳನ್ನು ಸಲಹುತ್ತಿದ್ದಾರೆ. ಅದರಲ್ಲಿ 50 ಹೆಣ್ಣಾದರೆ, 20 ಗಂಡು. ಇವುಗಳು ಕಾಲಕಾಲಕ್ಕೆ ಹಾಕುವ ಮರಿಗಳನ್ನು ಮಾರಾಟ ಮಾಡಿ ಲಾಭ ಗಳಿಸತೊಡಗಿದ್ದಾರೆ. ಈಗಾಗಲೇ ಹೀಗೆ ಆರು ಬಾರಿ ಮರಿಗಳ ಮಾರಾಟ ಮಾಡಿದ್ದಾರೆ.

ಜಯಕುಮಾರ್ ಅವರಿಂದ ಪ್ರೇರೇಪಿತಗೊಂಡು ಗ್ರಾಮದ ಮತ್ತೊಬ್ಬ ಕೃಷಿಕ ಅರೆತಿಮ್ಮಯ್ಯ (ಗಾಂಧಿ) ಅವರೂ ಈ ಇಲಿ ಸಾಕಾಣೆ ಆರಂಭಿಸಿದ್ದಾರೆ. ಇದಕ್ಕೆಂದೇ ತೋಟದ ಮನೆಯಲ್ಲಿ ಸುಮಾರು ₹3 ಲಕ್ಷ ಖರ್ಚು ಮಾಡಿ ಕೊಟ್ಟಿಗೆ ಕಟ್ಟಿಸಿಕೊಂಡಿದ್ದಾರೆ. ಒಂದು ಇಲಿಗೆ ₹800 ರಂತೆ ಒಟ್ಟು ₹80 ಸಾವಿರ ಕೊಟ್ಟು 100 ಇಲಿಗಳನ್ನು ತರಿಸಿಕೊಂಡಿದ್ದಾರೆ. ಅವೂ ಇದೀಗ ತಾನೇ ಮರಿ ಹಾಕುತ್ತಿದ್ದು, ಮೊದಲ ಆದಾಯದ ನಿರೀಕ್ಷೆಯಲ್ಲಿ ಇದ್ದಾರೆ.

ಮೊಲ ಸಾಕಾಣೆಗೆ ಪರ್ಯಾಯ: ‘ಈ ಮೊದಲು ಮೊಲ ಸಾಕುತ್ತಿದ್ದೆ. ಆದರೆ ಅವುಗಳನ್ನು ಸಲಹುವುದು ಕಷ್ಟವಾಗಿತ್ತು. ಅವು ಒಮ್ಮೊಮ್ಮೆ 10–12 ಮರಿ ಹಾಕುತ್ತಿದ್ದವು. ಆದರೆ ಅವುಗಳ ಕಾಳಜಿ ವಹಿಸುತ್ತಿರಲಿಲ್ಲ. ಹೀಗಾಗಿ ಮರಿಗಳು ಹುಟ್ಟಿದ ಐದು ದಿನಗಳ ಕಾಲ ಅವುಗಳಿಗೆ ನಾವೇ ಬಾಟಲಿಯಲ್ಲಿ ಹಾಲು ಕುಡಿಸಬೇಕಿತ್ತು. ಈ ಮಧ್ಯೆ ಹಾಲು ಸಿಗದೇ, ಇಲ್ಲವೇ ದೊಡ್ಡ ಮೊಲಗಳ ಕಾಲ್ತುಳಿತಕ್ಕೆ ಸಿಕ್ಕು ಸಾಕಷ್ಟು ಮರಿಗಳು ಸಾಯುತ್ತಿದ್ದವು. ಹೀಗಾಗಿ ಅವುಗಳ ಸಹವಾಸ ಬೇಡ ಎಂದು ನಿರ್ಧರಿಸಿದ್ದೆ. ನಂತರದಲ್ಲಿ ಒಮ್ಮೆ ತಮಿಳುನಾಡಿಗೆ ಭೇಟಿ ಕೊಟ್ಟಾಗ ಅಲ್ಲಿ ಈ ಬಿಳಿ ಇಲಿಗಳ ಸಾಕಾಣೆ ಬಗ್ಗೆ ತಿಳಿಯಿತು. ಕುತೂಹಲ ಮೂಡಿ ಅವುಗಳನ್ನು ಸಾಕುವ ನಿರ್ಧಾರಕ್ಕೆ ಬಂದೆ. ಈಗ ಅದೇ ನಮ್ಮ ಕೈಹಿಡಿದಿದೆ’ ಎಂದು ಜಯಕುಮಾರ್ ಹೇಳುತ್ತಾರೆ.

ಮೊಲಕ್ಕೆ ಬಳಸುತ್ತಿದ್ದ ಬೋನುಗಳು, ಪರಿಕರಗಳನ್ನೇ ಇಲಿ ಸಾಕಾಣೆಗೂ ಬಳಸಿಕೊಳ್ಳಲಾಗಿದೆ. ದಿನಕ್ಕೆ ಎರಡು ಅಥವಾ ಮೂರು ಬಾರಿ ಅವುಗಳಿಗೆ ಆಹಾರ ಕೊಡುತ್ತಿದ್ದಾರೆ. ಜೋಳದ ಎಳೆಯ ಕಡ್ಡಿ, ಕುದುರೆ ಮೆಂತ್ಯೆ, ಗರಿಕೆ ಹುಲ್ಲು, ರೇಷ್ಮೆ ಸೊಪ್ಪುಗಳನ್ನು ಅವುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ಜೊತೆಗೆ ಪ್ರತಿ ಇಲಿಗೆ ದಿನಕ್ಕೆ 50 ಗ್ರಾಂನಷ್ಟು ಕಡಲೆ ಹೊಟ್ಟು, ಬೂಸ ನೀಡುತ್ತಾ

ಬಂದಿದ್ದಾರೆ. ಇಲಿಗಳಿಗೆ ಬೇಕಾದ ಮೇವನ್ನು ಹೊಲದಲ್ಲಿಯೇ ಬೆಳೆದುಕೊಳ್ಳಲಾಗುತ್ತಿದೆ. ಕಡಲೆ ಹೊಟ್ಟು, ಬೂಸಕ್ಕೆ ಮಾತ್ರ ದುಡ್ಡು ಖರ್ಚಾಗುತ್ತಿದೆ.

ನಿರ್ವಹಣೆ ಸುಲಭ: ಇಲಿಗಳಿಗೆ ಆಹಾರ ನೀಡಲು, ಸ್ವಚ್ಛತಾ ಕಾರ್ಯಕ್ಕೆ ಜನ ಬೇಕು. ಉಳಿದ ಅವಧಿಯಲ್ಲಿ ಅವುಗಳನ್ನು ನೋಡಿಕೊಳ್ಳುವುದು ಬೇಕಿಲ್ಲ. ಆಹಾರದಲ್ಲಿಯೇ ಅವು ನೀರನ್ನು ಪಡೆದುಕೊಳ್ಳುವುದರಿಂದ ನೀರು ಇಡುವ ಅಗತ್ಯವೂ ಇಲ್ಲ. ಕೋಳಿ, ಮೊಲಗಳಂತೆ ಇವುಗಳಿಗೆ ರೋಗ ಬಾಧೆ ಕಾಡುವುದಿಲ್ಲ. ಪ್ರಯೋಗಾಲಯಗಳಿಗೆ ಬಳಸುವುದರಿಂದ ಯಾವುದೇ ಔಷಧ ನೀಡುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಇಲಿ ಸಾಕಾಣಿಕೆಯು ಸುಲಭದ ಕೆಲಸವಾಗಿದೆ ಎನ್ನುತ್ತಾರೆ ಈ ರೈತರು.

ಮಾರಾಟ ಹೇಗೆ: ಸದ್ಯ ಈ ರೈತರು ತಮಿಳುನಾಡು ಮೂಲದ ಕಂಪನಿಯೊಂದರ ಜೊತೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಅವರೇ ನೇರವಾಗಿ ರೈತರಿಂದ ಇಲಿಯ ಮರಿಗಳನ್ನು ಖರೀದಿ ಮಾಡುತ್ತಿದ್ದಾರೆ. 20–30 ದಿನ ಪ್ರಾಯದ, 150 ಗ್ರಾಂನಿಂದ 400 ಗ್ರಾಂನಷ್ಟು ತೂಕದ ಮರಿಗಳನ್ನು ಮಾತ್ರ ಕೊಂಡುಕೊಳ್ಳುತ್ತಾರೆ. ಹೀಗೆ ಖರೀದಿಯಾದ ಪ್ರತಿ ಮರಿಗೆ ₹400–500 ಹಣ ನೀಡುತ್ತಿದ್ದಾರೆ.

ವಯಸ್ಕ ಇಲಿಗಳ ಪೈಕಿ ಗಂಡು–ಹೆಣ್ಣಿನ ಅನುಪಾತ 20–50ರಂತೆ ನೋಡಿಕೊಳ್ಳಲಾಗುತ್ತಿದೆ. ಹೆಣ್ಣು ಇಲಿಗಳು ಸರಾಸರಿ ಪ್ರತಿ ಎರಡು ತಿಂಗಳಿಗೆ ಒಮ್ಮೆ ಮರಿ ಹಾಕುತ್ತಿವೆ. ಒಂದು ಇಲಿ ಒಮ್ಮೆಗೆ ಸರಾಸರಿ ಮೂರು ಮರಿ ಹಾಕುತ್ತಿದೆ. ಹೀಗಾಗಿ ಪ್ರತಿ ಇಲಿ ವರ್ಷವೊಂದಕ್ಕೆ 18–20 ಮರಿ ಹಾಕುತ್ತಿದೆ. ಇದರಿಂದ ವರ್ಷಕ್ಕೆ ಒಂದು ಇಲಿಯಿಂದಲೇ 8 ಸಾವಿರದಷ್ಟು ಆದಾಯ ಬರುತ್ತಿದೆ. ಆದಾಯದಲ್ಲಿ ಅರ್ಧದಷ್ಟು ಖರ್ಚು ಕಳೆದರೂ ಇನ್ನರ್ಧ ಲಾಭ ಸಿಗುತ್ತಿದೆ. ನೂರು ಇಲಿ ಸಾಕಿದರೆ ವರ್ಷಕ್ಕೆ ಕಡಿಮೆ ಎಂದರೂ ₹2ರಿಂದ 3 ಲಕ್ಷದಷ್ಟು ಲಾಭ ಪಡೆಯಬಹುದು ಎನ್ನುತ್ತಾರೆ ಜಯಕುಮಾರ್‌.

ಇಲಿಗಳ ಸಂತಾನೋತ್ಪತ್ತಿ ಪ್ರಕ್ರಿಯೆಯು ತೀವ್ರವಾಗಿದೆ. ಅವು ಮರಿ ಹಾಕಿದ ಮರು ಹೊತ್ತಿನಲ್ಲಿಯೇ ಮತ್ತೆ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಮರಿಯು ಜನಿಸಿದ ಐದು ನಿಮಿಷದಲ್ಲಿಯೇ ಹಾಲು ಕುಡಿದರೆ, ಕೆಲವೇ ಗಂಟೆಗಳಲ್ಲಿ ಮೇಯುವುದನ್ನು ಕಲಿಯುತ್ತದೆ. ಒಂದು ಹೆಣ್ಣು ಇಲಿ ತನ್ನ ಮರಿಗಳಿಗೆ ಮಾತ್ರವಲ್ಲದೆ ಇತರೇ ಮರಿಗಳಿಗೂ ಬೇಧವಿಲ್ಲದೆ ಹಾಲು ಕುಡಿಸುತ್ತದೆ. ಹೀಗಾಗಿ ಮೊಲಗಳಂತೆ ಇವುಗಳ ಮರಿಗಳನ್ನು ಜೋಪಾನವಾಗಿ ಸಲಹುವ ತಾಪತ್ರಯ ಇಲ್ಲ. ಒಂದು ಇಲಿಯನ್ನು ಐದಾರು ವರ್ಷ ಸಾಕಬಹುದು ಎನ್ನುತ್ತಾರೆ ಅರೆತಿಮ್ಮಯ್ಯ.

ಮಾರುಕಟ್ಟೆಯಲ್ಲಿ ಬೇಡಿಕೆ: ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಔಷಧ ಪ್ರಯೋಗಾಲಯಗಳು ವಿವಿಧ ಪ್ರಯೋಗಗಳಿಗೆ ಇಲಿಗಳನ್ನು ಬಳಸಿಕೊಳ್ಳುತ್ತಿವೆ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಇಲಿಯ ಬೆಲೆ ₹1000–1500ರವರೆಗೂ ಇದೆ. ಹೆಚ್ಚಿನ ಬೇಡಿಕೆಯೂ ಇದೆ. ಇಲಿಗಳನ್ನು ಮಾರಾಟ ಮಾಡುವವರು ಸಂಬಂಧಿಸಿದ ಸಂಸ್ಥೆಗಳಿಂದ ಪರವಾನಗಿ ಹೊಂದಿರಬೇಕಾಗುತ್ತದೆ. ಕಾಲಕಾಲಕ್ಕೆ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.

ಸದ್ಯ ಇಲ್ಲಿನ ರೈತರು ಮಧ್ಯವರ್ತಿಗಳಿಗೆ ಇಲಿಗಳನ್ನು ಸರಬರಾಜು ಮಾಡುತ್ತಿದ್ದು, ಅವರು ಪರವಾನಗಿ ಹೊಂದಿದವರ ಮೂಲಕ ದುಪ್ಪಟ್ಟು ದರಕ್ಕೆ ಮರು ಮಾರಾಟ ಮಾಡುತ್ತಿದ್ದಾರೆ. ನೇರ ಮಾರಾಟಕ್ಕೆ ಮುಂದಾದಲ್ಲಿ ರೈತರಿಗೇ ಹೆಚ್ಚಿನ ಲಾಭ ದೊರೆಯಲಿದೆ. ಹೀಗಾಗಿ ಕಾನೂನಾತ್ಮಕವಾಗಿ ಪರವಾನಗಿ ಪಡೆದು, ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡು ನೇರ ಮಾರಾಟ ಮಾಡಲು ಈ ರೈತರು ಚಿಂತನೆ ನಡೆಸಿದ್ದಾರೆ.

ಸದ್ಯ ವಿಜ್ಞಾನ ಲೋಕದ ಪ್ರಯೋಗಗಳಿಗೆ ಇಲಿಗಳ ಬಳಕೆ ಕಡಿಮೆ ಮಾಡಬೇಕು ಎನ್ನುವ ಕೂಗೂ ಎದ್ದಿದೆ. ಇದು ಕಾರ್ಯಾರೂಪಕ್ಕೆ ಬಂದಲ್ಲಿ ಮಾತ್ರ ಈ ಇಲಿಗಳ ಬೇಡಿಕೆ ಕೊಂಚ ತಗ್ಗಲಿದೆ. ಹೀಗಾಗಿ ಕಾದು ನೋಡಿ ಮುಂದಿನ ನಡೆ ಇಡಲು ಇಲ್ಲಿನ ರೈತರು ಸಿದ್ಧತೆ ನಡೆಸಿದ್ದಾರೆ.
ಸಂಪರ್ಕಕ್ಕೆ 9741631862.

ಅಜೋಲಾದ ಉಪಯೋಗಗಳು


ಅಜೋಲಾ ನೀರಿನ ಮೇಲೆ ತೇಲಾಡಿಕೊಂಡು ಬೆಳೆಯುವ ಝರಿ ಸಸ್ಯ. ಇದರ ಎಲೆಗಳ ರಂಧ್ರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನೀಲಿ ಹಸಿರು ಪಾಚಿ ಗುಪಿಗೆ ಸೇರಿದ ಅಣುಜೀವಿಗಳಿರುತವೆ.

ಅಜೋಲಾ ಸಸ್ಯದಲ್ಲಿ ಶೇ. 4ರಿಂದ 5ರಷ್ಟು ಸಾರಜನಕ, ಶೇ. ೦.5ರಿಂದ 1.೦ ರಂಜಕ ಶೇ. 3ರಿಂದ 7 ಪೊಟ್ಯಾಷ್ ,ಸುಣ್ಣ, ಕಬ್ಬಿಣ, ಮ್ಯಾಂಗನೀಸ್,ಮೆಗ್ನಿಶಿಯಂ ಇತ್ಯಾದಿ ಪೋಷಕಾಂಶಗಳಿರುತ್ತವೆ. ಗದ್ದೆಯಲ್ಲಿ ಬೆಳೆಯುವ ಭತ್ತಕ್ಕೆ ಇದೊಂದು ಉತ್ತಮ ಜೈವಿಕ ಗೊಬ್ಬರವಾಗುತ್ತದೆ.

ರಾಜ್ಯದಲ್ಲಿ ಅಜೋಲ್ಲ ಪಿನ್ನಾಟ ಹಾಗು ಅಜೋಲ್ಲ ಮೈಕ್ರೋಫಿಲ್ಲಾ ತಳಿಗಳು ಮಲೆನಾಡು ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ. ಈ ಅಜೋಲಾ ತಳಿಗಳ ಜೊತೆ ಸಹ ಜೀವನ ನಡೆಸುತಿರುವ ನೀಲಿ ಹಸಿರು ಪಾಚಿಗಳೆಂದರೆ ಅನಾಬಿನಾ, ನಾಸ್ಟಾಕ್, ಪ್ಲೇಕೊನಿಮಾ, ಆಸಿಲೇಟೋರಿಯ, ಇತ್ಯಾದಿ. ಅಜೋಲಾವನ್ನು ನೀರಿನ ತೊಟ್ಟಿ, ಕೆರೆಗಳಲ್ಲಿ, ಮತ್ತು ಗದ್ದೆಗಳಲ್ಲೂ ಬೆಳೆಯಲಾಗುತ್ತದೆ.

ಉಪಯೋಗಿಸುವ ವಿಧಾನ

ಪ್ರತೀ ಎಕರೆ ಗದ್ದೆಯಲ್ಲಿ ಬೆಳೆಯುವ ಭತ್ತಕ್ಕೆ 300 ಕಿ.ಗ್ರಾಂ. ಹಸಿರು ಪಾಚಿ ಜೈವಿಕ ಗೊಬ್ಬರದ ಅವಶ್ಯಕತೆಯಿದೆ. ಈ ಕಾರಣದಿಂದ ರೈತರು ತಮಗೆ ಅಗತ್ಯವಿರುವ ಅಜೋಲಾವನ್ನು ಸುಲಭವಾಗಿ ಬೆಳೆದುಕೊಳ್ಳಬಹುದು.

ಒಂದು ಎಕರೆ ಭತ್ತದ ಬೆಳೆಗೆ ಅಗತ್ಯವಿರುವ ಅಜೋಲಾವನ್ನು ಬೆಳೆಯಲು ಒಂದು ಗುಂಟೆ ಪ್ರದೇಶವನ್ನು ಹದ ಮಾಡಿಕೊಂಡು ನಾಲ್ಕು ಬುತ್ತಿ ಸೆಗಣಿ ( 100 ಕಿ.ಗ್ರಾಂ. ) ಹಾಕಿ 3ರಿಂದ 4ಅಂಗುಲ ನೀರು ಮಣ್ಣಿನ ಮೇಲೆ ನಿಲ್ಲುವಂತೆ ಮಾಡಬೇಕು. ನಂತರ 20 ಕಿಲೋ ಅಜೋಲಾ ಸಸಿಗಳನ್ನು ನೀರಿನ ಮೇಲೆ ಹರಡಿದರೆ 2 ವಾರಗಳಲ್ಲಿ ಸಮೃದ್ಧವಾಗಿ ಬೆಳೆದು 300 ಕಿಲೋಗಳಾಗುವಷ್ಟು ಆಗುವುದು.

ಪ್ರತೀ ಎಕರೆಗೆ 300 ಕಿಲೋ ಅಜೋಲಾವನ್ನು ಭತ್ತದ ಪೈರು ನಾಟಿ ಮಾಡುವ ಮುನ್ನ ಗದ್ದೆಯಲ್ಲಿ ನೀರಿನ ಮೇಲೆ ಹರಡಬೇಕು. ಮೂರು ವಾರಗಳಲ್ಲಿ ಅಜೋಲಾ ಚೆನ್ನಾಗಿ ಬೆಳೆಯುತ್ತದೆ. ಭತ್ತದ ಪೈರು ನಾಟಿ ಮಾಡುವುದಕ್ಕೆ ಮೊದಲು ಗದ್ದೆಯಲ್ಲಿ ನೀರನೆಲ್ಲ ಬಸಿದು ಅಜೋಲಾವನ್ನು ಗದ್ದೆಗೆ ಸೇರಿಸಿದರೆ, ಅದು ಮಿಶ್ರಣಗೊಂಡು ಗದ್ದೆಯಲ್ಲಿರುವ ನೀಲಿ ಹಸಿರು ಪಾಚಿಯ ಸಹಾಯದಿಂದ ತನ್ನಲ್ಲಿರುವ ಸಾರಜನಕವನ್ನು ಮಣ್ಣಿಗೆ ಬಿಡುಗಡೆ ಮಾಡುತ್ತದೆ.

ಒಂದುವೇಳೆ ರೈತರಿಗೆ ಅಜೋಲಾ ಬೆಳೆಯಲು ಮೂರು  ವಾರಗಳಲ್ಲಿ ಕಾಲಾವಕಾಶವಿಲ್ಲದಿದ್ದರೆ ಭತ್ತದ ಪೈರನ್ನು ಮೊದಲು ನಾಟಿ ಮಾಡಿ ಪೈರಿನ ಸಾಲುಗಳ ಮದ್ಯದಲ್ಲಿ ಅಜೋಲಾವನ್ನು ಗದ್ದೆಯಲ್ಲಿ ಹರಡಿದರೆ, ಅದು ಪೈರಿನ ಜೊತೆ ಬೆಳೆಯುವುದು.
ಅಜೋಲಾ

ಉಪಯೋಗಗಳು 


  1. ಅಜೋಲಾ ಭತ್ತದ ಕೃಷಿಗೆ ಅಗತ್ಯವಾಗಿ ಬೇಕಾದ ಸಾರಾಜನಕ, ರಂಜಕ, ಪೊಟ್ಯಾಷ್, ಮತ್ತು ಇತರೆ ಪೋಷಕಾಂಶಗಳನ್ನು ಪೂರೈಸುತ್ತದೆ. 
  2. ಅಜೋಲಕ್ಕೆ ತ್ವರಿತವಾಗಿ ಬೆಳೆಯುವ ಶಕ್ತಿಯಿದ್ದು ಇದೊಂದು ಉತ್ತಮವಾದ ಹಸಿರೆಲೆ ಗೊಬ್ಬರವಾಗಿದೆ. ಇದರಿಂದ ಭತ್ತದ ಇಳುವರಿ ಶೇ.10ರಿಂದ 15ರಷ್ಟು ಹೆಚ್ಚಳವಾಗುತ್ತದೆ.
  3. ಅಜೋಲಾವನ್ನು ಸಾವಯವ ಗೊಬ್ಬರವಾಗಿ ಹಣ್ಣು, ತರಕಾರಿ, ಹೂವಿನ ಗಿಡಗಳಿಗೂ ಕೊಡುವುದರಿಂದ ಇಳುವರಿಯಲ್ಲಿ ಹೆಚ್ಚಳವಾಗುವುದು.
  4. ಕಾಂಪೋಷ್ಟ್ ಗೊಬ್ಬರ ತಯಾರಿಕೆಯಲ್ಲಿ ಅಜೋಲಾವನ್ನು ಮಿಶ್ರಣ ಮಾಡಿದರೆ  ಗೊಬ್ಬರದಲ್ಲಿರುವ ಪೌಷ್ಟಿಕತೆ ಹೆಚ್ಚಳವಾಗುತ್ತದೆ.
  5. ಅಜೋಲದಲ್ಲಿ ಶೇ.30ರಷ್ಟು ಪ್ರೋಟೀನಿನ ಪ್ರಮಾಣವಿರುವುದರಿಂದ ಸಾಕು ಪ್ರಾಣಿಗಳಾದ ಧನಕರುಗಳಿಗೆ, ಕೋಳಿಗಳಿಗೆ ಆಹಾರವಾಗಿ ಕೊಡಬಹುದು.

Azolla Seed - Mother Fern - 500g ಅಜೋಲಾದ ಬೀಜ 


Price: ₹ 125.00
https://amzn.to/2RHRwOt


YUVAGREEN Azolla Bed for Azolla Cultivation Green , 12'x4'x1' , 450 GSM

https://amzn.to/2xjktqB

ಕರಾವಳಿಗೆ ಸೂಕ್ತ ಹಣ್ಣು ರಾಮ ಫಲ/rama phala fruit

rama phala fruit
ವಿದೇಶದ ಹಣ್ಣು, ಎಂದರೆ ಎಷ್ಟು ಬೆಲೆಯಾದರೂ ಕೊಳ್ಳುವ ನಾವು ಸ್ಥಳೀಯ ಹಣ್ಣುಗಳ ಪೌಷ್ಟಿಕತೆ ಬಗ್ಗೆ ಸ್ವಲ್ಪವೂ ಯೋಚನೆ ಮಾಡುವುದಿಲ್ಲ. ನಮ್ಮ ಸುತ್ತ ಮುತ್ತ ಬೆಳೆಯುತ್ತಿರುವ ಕೆಲವು ಹಣ್ಣಿನಲ್ಲಿ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿವೆ. ಈಗ ಸಾಂಪ್ರದಾಯಿಕ ಹಣ್ಣುಗಳಿಗೆ ಉತ್ತಮ ಬೇಡಿಕೆಯೂ ಇದೆ.

ಸಾಂಪ್ರದಾಯಿಕ ಹಣ್ಣುಹಂಪಲುಗಳಲ್ಲಿ ಮಾವು, ಸಪೋಟಾದಂತೆ ಸೀತಾಫಲ - ರಾಮಫಲವು ಒಂದು. ಸೀತಾಫಲ ಜಾತಿಯ ಹಣ್ಣುಗಳು ಕಡಿಮೆ ನೀರಿನಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಮಳೆ ಕಡಿಮೆ ಏರುವ ಕಡೆ ಸೀತಾಫಲ ಉತ್ತಮವಾಗಿ ಬೆಳೆದರೆ, ಕರಾವಳಿ ಜಿಲ್ಲೆಗಳ ಮಳೆಗೆ ಸರಿಯಾಗಿ  ಹೊಂದಿಕೆಯಾಗದು.ಇಲ್ಲಿ ಅದನ್ನು ಬೆಳೆಸುವುದು ವ್ಯರ್ಥ ಪ್ರಯತ್ನ.ಅದರ ಬದಲಿಗೆ ರಾಮಫಲ ಎಂಬ ಸೀತಾಫಲ ಜಾತಿಯ ಸಸ್ಯವನ್ನು ಬೆಳೆಸಿ ಉತ್ತಮ ಪಸಲು ಪಡೆಯಬಹುದು.ಇದರ ಸಸ್ಯ ಶಾಸ್ತ್ರೀಯ ಹೆಸರುAnnona reticulate.bullock'heart,wild-sweetsop. bull's  heart,ox-heart   ಎಂಬುದಾಗಿಯೂ ಕರೆಯುತ್ತಾರೆ. ಅನೋನೀಸಿ  ಸೇರಿದ ಫಲ ವೃಕ್ಷ. ಸೀತಾಫಲದಂತೆ ರುಚಿ ಹೊಂದಿದೆ. ಸೀತಾಫಲ ಸಸ್ಯಕ್ಕಿಂತ ದೊಡ್ಡದಾಗಿ (೨೫-೩೦ ಅಡಿ  ತನಕವೂ )ಬೆಳೆಯುತ್ತದೆ. ಅಧಿಕ ಹಣ್ಣುಗಳನ್ನೂ ಕೊಡುತ್ತದೆ.ಆದರೆ ಸೀತಾಫಲದಷ್ಟು ಪ್ರಚಾರವನ್ನು  ಪಡೆದಿಲ್ಲ. ಸೀತಾಫಲಕ್ಕೆ ಹೋಲಿಸಿದರೆ ಈ ಹಣ್ಣಿನಲ್ಲಿ ವೇಸ್ಟೇಜ್ ಕಡಿಮೆ. ಇದರ ಹಣ್ಣಿನಲ್ಲಿ ಉತ್ತಮ ಪೋಷಕಾಂಶಗಳು ಅಡಕವಾಗಿವೆ. ಇದನ್ನು ಹಾಗೆಯೇ ತಿನ್ನಬಹುದು. ಹಣ್ಣಾದ ಮೇಲೆ ಗೊಂಜಾನ್ನು ಎಳೆದರೆ ಸಿಗುವುದೆಲ್ಲ ತಿನ್ನುವ ತಿರುಳು. ತಿನ್ನುವಾಗ ಬೀಜ ಮಾತ್ರ ಬಿಸಾಡುವಂತದ್ದು. ಜ್ಯುಸ್ ಮಾಡಿಯೂ (ಮಿಲ್ಕ್ ಶೇಕ್ ) ಸೇವಿಸಬಹುದು. ಕತ್ತಿ, ಚಾಕುವಿನಿಂದ ಕೊರೆಯಬೇಕಿಲ್ಲ.

100 ಗ್ರಾಂ ಹಣ್ಣಿನಲ್ಲಿರುವ ಪೋಷಕಾಂಶಗಳು


ಶಕ್ತಿ 101 ಕ್ಯಾಲೋರಿಗಳು, ಕಾರ್ಬೋ ಹೈಡ್ರೇಟುಗಳು -25 ಗ್ರಾಂ, ಕರಗಬಲ್ಲ ನಾರು -2.4 ಗ್ರಾಂ, ಕೊಬ್ಬು -0.6 ಗ್ರಾಂ, ಪ್ರೋಟೀನು ಬಿ1.7gm ವಿಟಮೀನ್ ಬಿ 3 -3% ವಿಟಮಿನ್ ಬಿ 5-3%,ಮೆಗ್ನೀಶಿಯಂ -5 ಕಬ್ಬಿನಾಂಶ -5%, ಮತ್ತು ಪೋಸ್ಫಾರಸ್-3%, ಇಷ್ಟೊಂದು ಪೌಷ್ಟಿಕಾಂಶ ಒಳಗೊಂಡ ಹಣ್ಣು ಮತ್ತೊಂದಿಲ್ಲ.

ಇದು ಮದ್ಯ ಮೆಕ್ಸಿಕೋ ದೇಶದ್ದು ಎನ್ನಲಾಗುತ್ತಿದೆ. ಕರಾವಳಿಯಾದ್ಯಂತ  ಇದನ್ನು ಕಾಣಬಹುದು. ಇದನ್ನು ಬೀಜದಿಂದ ಸಸ್ಯಾಭಿವೃದ್ಧಿ ಮಾಡಬಹುದು. ಯಾವುದೇ ರೋಗ ರುಜಿನಗಳು ಇಲ್ಲ. ಆರೋಗ್ಯಕ್ಕೆ ಉತ್ತಮ ಹಣ್ಣು ಆದ ಕಾರಣ ಬೇಡಿಕೆ ಚೆನ್ನಾಗಿದೆ. ನೀರೊತ್ತಾಯ ಇದ್ದಾಗಲೂ ಚೆನ್ನಾಗಿ ಬೆಳೆಯುತ್ತದೆ. ಗೊಬ್ಬರ ನೀರಿಗೆ ಚೆನ್ನಾಗಿ ಸ್ಪಂದಿಸಿ ಅಧಿಕ ಇಳುವರಿಯನ್ನು ನೀಡುತ್ತದೆ. ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತಿದ್ದು, ಭಾರತದಲ್ಲಿ ಇದನ್ನು ರಾಮಫಲ ಎಂದು ಕರೆಯುತ್ತಾರೆ.

ತೋಟದ ಬದಿಯಲ್ಲಿ, ನಿರುಪಯುಕ್ತ ಭೂಮಿಯಲ್ಲಿ ಇದನ್ನು ಬೆಳೆಸಿ ಅಂಗಡಿಗೆ ಮಾರಾಟ ಮಾಡಬಹುದು. ಈ ಹಣ್ಣಿನ ಲಭ್ಯತೆ ಇಲ್ಲದ ಕಾರಣ ಸೀತಾಫಲದಂತೆ ಮಾರುಕಟ್ಟೆ ಇಲ್ಲ. ಮಹಾರಾಷ್ಟ್ರದ ಔರಂಗಾಬಾದ್ ಸುತ್ತಮುತ್ತ ಇದನ್ನು ಒಳ್ಳೆಯ ಬೆಳೆಗೆ ಮಾರಾಟ ಮಾಡುತ್ತಾರೆ. ಇಂದು ಹಣ್ಣು ವ್ಯಾಪಾರಿಗಳು ಯಾವುದೇ ಹಣ್ಣನ್ನು ಕೊಟ್ಟರೂ ವ್ಯಾಪಾರ ಮಾಡುತ್ತಾರೆ.

ಪಾಲಿಹೌಸ್ ನಲ್ಲಿ ಕಾಳುಮೆಣಸು, ದಾಳಿಂಬೆ ಸಸಿ ತಯಾರಿ

 Greenhouse Tunnel



ಪೊದೆ  ಆಕಾರದ ಕಾಳುಮೆ ಣಸಿನ ಸಸಿಯೋಗಳನ್ನು ಉತ್ಪಾದಿಸಿಕೊಳ್ಳಲು ಈಗ ಸೂಕ್ತಕಾಲ. ಪ್ರಸ್ತುತ ವರ್ಷ ಕಾಳುಮೆಣಸನ್ನು ಬಿಟ್ಟಿರುವ ಕಡ್ಡಿಗಳು /ಗೆಲ್ಲುಗಳು ಸಸಿ ಉತ್ಪಾದನೆಗೆ ಸೂಕ್ತ. ೩ ಗೆಣ್ಣು ಇರುವಂತೆ ಕಡ್ಡಿಯನ್ನು ಕತ್ತರಿಸಿಕೊಂಡು, ತಕ್ಷಣವೇ ಬೇರು ಪ್ರಚೋದಕ ರಾಸಾಯನಿಕ ವಸ್ತುವನ್ನು (ಸೆರೆಡೆಕ್ಸ್ )ತಳಬಾಗದ ಗೆಣ್ಣಿಗೆ ಲೇಪಿಸಿ ,ಗೊಬ್ಬರದ ಮಿಶ್ರಣ ತುಂಬಿದ ಪಾಲಿಥೀನ್ ಚೀಲದಲ್ಲಿ, ಒಂದು ಚೀಲಕ್ಕೆ ೩ ಕಡ್ಡಿಗಳಂತೆ ನೆಡಬೇಕು.ಒಂದು ಲೀಟರ್ ನೀರಿಗೆ ೧೦ ಗ್ರಾಂ. ಕಾಪರ್ ಆಕ್ಸಿ ಕ್ಲೋರೈಡ್ ಪುಡಿಯನ್ನು ಮಿಶ್ರಣ ಮಾಡಿ (ಶೇ.೧ರ ಪ್ರಮಾಣ )ಪಾಲಿಥೀನ್ ಚೀಲಕ್ಕೆಹಾಕಬೇಕು.ಇವುಗಳನ್ನು ಪಾಲಿಹೌಸ್ ನಲ್ಲಿ ಇಡುವುದರಿಂದ ಸೂಕ್ತ ನೀರಿನ ಆದ್ರತೆ ಮತ್ತು ಉಷ್ಟಾಂಶ ದೊರೆತು ಎಲ್ಲಾ ಕಡ್ಡಿಗಳು ಬೇರು ಬಿಟ್ಟು ಚಿಗುರುತ್ತವೆ.ಚಿಗುರಿದ ನಂತರ ಹೊರಕ್ಕೆ ತೆಗೆದು ನೆರಳಿನಲ್ಲಿರಿಸಿ ನಾಟಿ ಮಾಡುವವರೆಗೆ ನೀರು ಹಾಕಿ ನಿರ್ವಹಣೆ ಮಾಡಬೇಕು.ಪಾಲಿಹೌಸ್ನಲ್ಲಿ ನೀರಿನ ಆದ್ರತೆ ಮತ್ತು ಉಷ್ಟಾಂಶವನ್ನು ನಿಯಂತ್ರಿಸುವ ಸಾಧ್ಯತೆ ಇರುವುದರಿಂದ ವರ್ಷದ ಎಲ್ಲಾ ದಿನಗಳಲ್ಲಿ ಸಸಿ ತಯಾರಿಸಿಕೊಳ್ಳಬಹುದು.

   ದಾಳಿಂಬೆ ಸಸಿ ಉತ್ಪಾದನೆ


ಇತ್ತೀಚಿನ ದಿನಗಳಲ್ಲಿ ದಾಳಿಂಬೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ.ಹೆಚ್ಚು ದಾಳಿಂಬೆಯಲ್ಲಿ ಅಧಿಕ ಪಸಲು ಪಡೆಯಬೇಕಾದರೆ ಸೂಕ್ತ ಸಸಿಯ ಆಯ್ಕೆ ಮತ್ತು ನಿರ್ದಿಷ್ಟ ಬೇಸಾಯದ ಪದ್ಧತಿ ಅನುಸರಿಸುವುದು ಸೂಕ್ತ.

ದಾಳಿಂಬೆ ಸಸಿಗಳ ಆಯ್ಕೆ;ಸಸಿಗಳನ್ನು ಉತ್ಪಾದನೆ ಮಾಡಲು ದಾಳಿಂಬೆ ಗಿಡದಲ್ಲಿ ಹೆಚ್ಚು ಫಸಲು ಬಿಟ್ಟಿರುವಂತಹ ಕಡ್ಡಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.ಪೆನ್ಸಿಲ್ ಗಾತ್ರದ ಕಡ್ಡಿಗಳನ್ನು ೬ಅಂಗುಲ ಉದ್ದಕ್ಕೆ ಹರಿತವಾದ ಕತ್ತರಿಯಿಂದ ಕತ್ತರಿಸಿಕೊಳ್ಳಬೇಕು ಬೇರು ಬಿಡುವ ಭಾಗಕ್ಕೆ ಬೇರು ಪ್ರಚೋದಕ ರಾಸಾಯನಿಕ (ಸರೆಡೆಕ್ಸ್)ಪುಡಿಯನ್ನು ೧ಇಂಚು ಲೇಪಿಸಿ ಗೊಬ್ಬರ ಮಿಶ್ರಣ ತುಂಬಿದ ಪಾಲಿಥಿನ್ ಚೀಲದಲ್ಲಿ ನಾಟಿ ಮಾಡಿ ನೀರು ಹಾಕಿ ಪಾಲಿಹೌಸ್ನಲ್ಲಿಡಬೇಕು.ಬೇರು ಮತ್ತು ಚಿಗುರು ಬರುವವರೆಗೆ ನೀರು ಹಾಕಿ ನಿರ್ವಹಣೆ ಮಾಡಬೇಕು.

ಬೇಸಾಯದ ಪದ್ಧತಿ;ಪಾಲಿಥೀನ್ ಚೀಲದಲ್ಲಿನ ದಾಳಿಂಬೆ ಸಸಿಯನ್ನು ಭೂಮಿಯಲ್ಲಿ ಹದ ಮಾಡಿದ ಗುಂಡಿಯಲ್ಲಿ ನೆಟ್ಟು,ಬೇಸಾಯದ ಪದ್ದತಿಗಳನ್ನು ಅನುಸರಿಸಿ ನಿರ್ವಹಣೆ ಮಾಡಬೇಕಾಗುತ್ತದೆ.ಸಸಿಯಿಂದ  ಒಂದು ಅಡಿ ಎತ್ತರದ ನಂತರಬರುವ ಚಿಗರನ್ನು ಬೆಳೆಯಲು ಬಿಡಬೇಕು.ಒಂದು ಅಡಿ ಕೆಳಗೆ ಬರುವಂತಹ ಚಿಗುರುಗಳನ್ನು ತೆಗೆಯುತ್ತಿರಬೇಕು ದಾಳಿಂಬೆ ಫಸಲು ಪಡೆಯುವುದಕ್ಕಾಗಿ ದಾಳಿಂಬೆ ಗಿಡದಲ್ಲಿ ಎಷ್ಟು ರೆಂಬೆಗಳು ಬೇಕು?  ಎಷ್ಟು ಹಣ್ಣುಗಳು ಬೇಕು?   ಯಾವ ತಿಂಗಳಲ್ಲಿ ಹಣ್ಣುಗಳು ಬೇಕಾಗುತ್ತದೆ ಎಂಬುದರ ಆದಾರದ ಮೇಲೆ ದಾಳಿಂಬೆ ಗಿಡಗಳ ಕಡ್ಡಿಗಳನ್ನು ಕತ್ತರಿಸಬೇಕು.ಪಾಲಿಹೌಸ್ ಸರ್ವ ಋತುಗಳಲ್ಲಿಯೂ ಸಮ ಪ್ರಮಾಣದ ಹವಾಗುಣವನ್ನು ಒದಗಿಸುವುದರಿಂದ ಪಾಲಿಹೌಸ್ ಕಾಳುಮೆಣಸು ಮತ್ತು ದಾಳಿಂಬೆ ಸಸಿ ತಯಾರಿಸಲು ಸೂಕ್ತವಾಗಿದೆ.

Unique Plastic 9X3Unique Plastic Mini Greenhouse Tunnel (Diffused White) (White)

 https://amzn.to/2R2yuC8


Unique Plastic Mini Greenhouse Tunnel (Diffused White)

https://amzn.to/2WUbdYD

Outdoor Power Tools (Kannada)

ಕೃಷಿ ಯಂತ್ರೋಪಕರಣಗಳು ಮತ್ತು ಉಪಯೋಗ 

STIHL ಕಂಪೆನಿಯ ಯಂತ್ರಗಳನ್ನು ಖರೀದಿಸಲು ಕೆಳಗಿರುವ ಲಿಂಕ್ ಗೆ ಹೋಗಿ...

Stihl Cast Iron Chain Saw MS-180 (Orange)

Stihl Cast Iron Chain Saw MS-170 (Orange)


ಗೇರು ಹೂ ಒಣಗುವುದು ಮತ್ತು ಕಾರಣ



ಗೇರು ಬೆಳೆಗೆ ಹೂ ಬಿಡುವ ಸಮಯದಲ್ಲಿ ಹೂವು ಒಣಗಿ ಹೋಗುವುದು ದೊಡ್ಡ ನಷ್ಟ. ಸಾಮಾನ್ಯವಾಗಿ ಒಂದು ಹೂ ಗೊಂಚಲಿನಲ್ಲಿ 100ಕ್ಕೂ ಹೆಚ್ಚಿನ ಹೂ ಇದ್ದರೂ ಅದರಲ್ಲಿ 10% ಕಾಯಿಯಾಗುತ್ತದೆ. ಕೆಲವೆಡೆ ಅದು 2-3% ಆಗುವುದೂ ಇದೆ. ಹೂವು ಒಣಗುವುದಕ್ಕೆ ಕಾರಣ ಮೋಡ ಕವಿದ ವಾತಾವರಣ, ಮೋಡಕ್ಕೆ ಹೂ ಕರಟುತ್ತದೆ ಎಂದು ಜನ ತಿಳಿದಿದ್ದಾರೆ. ಆದರೆ ಮೋಡಕ್ಕೆ ಹೂ ಕರಟುವುದಲ್ಲ. ಮೋಡ ಕವಿದ ವಾತಾವರಣದಲ್ಲಿ ರಸ ಹೀರುವ ಟಿ ಸೊಳ್ಳೆಯ ಚಟುವಟಿಕೆ ಜಾಸ್ತಿಯಾದ ಕಾರಣ ಹೂವು ಒಣಗುತ್ತದೆ.

ಹೊವು ಒಣಗವುದು ಎಲ್ಲವೂ ಟಿ ಸೊಳ್ಳೆಯ ಉಪಟಳದಿಂದ. ಹೊ ಗೊಂಚಲಿನಲ್ಲಿ ಗಂಡು ಮತ್ತು ದ್ವಿಲಿಂಗ ಹೂವುಗಳಿದ್ದು, ಅದರ ಅನುಪಾತ ಸುಮಾರಾಗಿ 90:10 ರಷ್ಟು ಇರುತ್ತದೆ. ಹೆಣ್ಣು ಹೂಗಳು ಮಾತ್ರ ಫಲಿತವಾಗಿ ಕಾಯಿ ಕಟ್ಟುತ್ತದೆ. ಗಂಡು ಹೂಗಳು ಒಣಗುತ್ತವೆ. ಹೆಣ್ಣು + ಗಂಡು ಹೂಗಳ ಪ್ರಮಾಣ ಹೆಚ್ಚು ಇದ್ದಷ್ಟು ಕಾಯಿ ಕಟ್ಟುವಿಕೆ ಪ್ರಮಾಣ ಹೆಚ್ಚು. ಗೇರಿನಲ್ಲಿ ಹೆಣ್ಣು ಹೂವೆಂದು ನಾವು ಹೇಳುವಂತದ್ದು ದ್ವಿಲಿಂಗ ಹೂವಾಗಿರುತ್ತದೆ. ಇದರಲ್ಲಿ ಗಂಡು ಹೆಣ್ಣು  (ಪರಾಗ ಮತ್ತು ಶಾಲಾಕಾಂಗ polan and stigma)  ಗಳೆರಡೂ ಇರುತ್ತದೆ. ಆದರೆ ಆದಾಗಿ ಕಾಯಿ ಕಚ್ಚಿಕೊಳ್ಳುವುದಿಲ್ಲ. ಪ್ರಕೃತಿಯ ವೈಚಿತ್ರ್ಯವೆಂದರೆ ದ್ವಿಲಿಂಗ ಹೂವಿನಲ್ಲಿ ಗಂಡು ಭಾಗ ಕೆಳಗೂ,ಹೆಣ್ಣು ಭಾಗ ಮೇಲೂ ಇರುತ್ತದೆ. ಅದಕ್ಕೆ ಗಂಡು ಹೂವಿನ ಪರಾಗ ಮಿಶ್ರ ಪರಾಗಸ್ಪರ್ಶದ ಮೂಲಕ ಆಗಲೇ ಬೇಕು.  ಪರಾಗಸ್ಪರ್ಶದ ನಂತರ ಆ ಹೂವು ಒಣಗುತ್ತದೆ. ದ್ವಿಲಿಂಗ ಹೂವುಗಳೇ ಇಲ್ಲದಿರುವ ಪಕ್ಷದಲ್ಲಿ ಹೂ ಗೊಂಚಲೇ ಒಣಗುತ್ತದೆ.

ಕೆಲವು ತಳಿಗಳಲ್ಲಿ ಗಂಡು ಹೂಗಳ ಪ್ರಮಾಣ ಜಾಸ್ತಿ ಇರಬಹುದು. ತಳಿ ಗುಣವಲ್ಲದೆ ಮರದ ಆರೋಗ್ಯದ ಮೇಲೂ ಗಂಡು ಹೆಣ್ಣು ಹೂಗಳ ಅನುಪಾತ ಹೆಚ್ಚು ಕಡಿಮೆ ಆಗುತ್ತದೆ. ಸರಿಯಾದ ಪೋಷಕಾಂಶ ಹೊಂದಿರುವ ಮಣ್ಣಿನಲ್ಲಿ ಬೆಳೆದ ಮರದಲ್ಲಿ ಹೆಣ್ಣು ಹೂಗಳ ಪ್ರಮಾಣ ಸ್ವಲ್ಪ ಜಾಸ್ತಿ ಇರುತ್ತದೆ. ಏನೇನೂ ಪೋಷಕಾಂಶ ಇಲ್ಲದ ಮಣ್ಣಿನಲ್ಲಿ ಬೆಳೆದ ಮರದ ಹೂ ಗೊಂಚಲಿನಲ್ಲಿ ಗಂಡು ಹೂಗಳ ಪ್ರಮಾಣ ಅಧಿಕ ಇರುವುದೂ ಇದೆ.

ಆದ ಕಾರಣ ಹೂ ಒಣಗುವುದಕ್ಕೆ ಟಿ ಸೊಳ್ಳೆ ಒಂದೇ ಕಾರಣ ಅಲ್ಲ. ಹೂಗಳ ಅನುಪಾತ, ಪೋಷಕಾಂಶ, ಸೂರ್ಯನ ಬೆಳಕು, ಅದರ ದಿಕ್ಕು, ಗಾಳಿ  ಪರಾಗಸ್ಪರ್ಶಕ್ಕೆ ಕಾರಣ. ವ್ಯವಸ್ಥಿತವಾಗಿ ಗೊಬ್ಬರ ಕೊಟ್ಟು , ನೀರಾವರಿ ಮಾಡಿ, ಬೆಳೆದ ಮರದಲ್ಲಿ ಹೆಣ್ಣು ಹೂಗಳು ಹೆಚ್ಚಳವಾಗುವ ಸಾದ್ಯತೆ ಇದೆ. ಹೆಚ್ಚಿಗೆ ಇರುವ ಮಿಡಿಗಳು ಪುಷ್ಠಿಯಾಗಿ ಬೆಳೆಯಲು ಇದು ಸಹಕಾರಿ. ನೀರು, ಪೋಷಕಾಂಶ ಎಲ್ಲದರ ಕೊರತೆ ಇರವ ಕಡೆ ಕಾಯಿಗಳೂ ಸಮರ್ಪಕವಾಗಿ ಬೆಳೆಯದೆ,ಕೀಟ ಬಾಧೆಗೂ ಬೇಗ ತುತ್ತಾಗುತ್ತದೆ.